ಪ್ರೇಯಸಿ, ಪ್ರಿಯಕರರ ವಿರಹ ಯಾತನೆಯನ್ನು ವರ್ಣಿಸುವ ಹಲವಾರು ಪದ್ಯಗಳನ್ನು ಕೇಳಿದ್ದೇವೆ. ದಂಪತಿಗಳಿಬ್ಬರ ವಿರಹ ವೇದನೆಯನ್ನು, ಪ್ರೀತಿಯ ಬಾಂಧವ್ಯಗಳನ್ನು ಎಳೆ ಎಳೆಯಾಗಿ ಬಿಡಿಸಿಡುವ ನರಸಿಂಹ ಸ್ವಾಮಿಯವರ ಈ ಪದ್ಯ ವಿಶಿಷ್ಟವಾದುದು. ಕಾರಣಾಂತರಗಳಿಂದ ತವರು ಮನೆಯಲ್ಲಿ ಹಲವುದಿನ ಉಳಿಯಬೇಕಾದ ಹೆಣ್ಣು, ತನ್ನ ಗಂಡನನ್ನು ಓಲೈಸುವ ಪರಿ ಇಂತಿಹುದು:
ನಿಮ್ಮ ಪ್ರೆಮವನೀವೆ ಒರಯನಿತ್ತು.
ನಿಮ್ಮ ನೆನಸೇ ನನ್ನ ಹಿಂಡುವುದು ಹಗಲಿನಲಿ,
ಇರುಳಿನಲಿ ಕಾಡುವುದು, ನಿಮ್ಮ ನೆನಪು...
ಇರುಳಿನಲಿ ಕಾಣುವುದು, ನಿಮ್ಮ ಕನಸು...
ಬೃಂದಾವನದ ಹಣೆಗೆ ಕುಂಕುಮವನಿಡುವಾಗ,
ಕಾಣುವವು ಶ್ರೀ ತುಳಸಿ, ಕೃಷ್ಣ ತುಳಸಿ;
ನೀಲಾಂಬರದ ನಡುವೆ ಚಂದಿರನು ಬಂದಾಗ,
ರೋಹಿಣಿಯು ಬೆಳಗುವಳು ಸನ್ನಿಧಿಯಲಿ.
ತಾಯಡಿಗೆ ರುಚಿಯೆಂದು ನಾನಿಲ್ಲಿ ಕುಳಿತಿಲ್ಲ
ಇನ್ನು ತಂಗಿಯ ಮದುವೆ ತಿಂಗಳಿಹುದು;
ತೌರ ಪಂಜರದೊಳಗೆ ಸೆರೆಯಾದ ಗಿಣಿಯಲ್ಲ,
ಐದು ತಿಂಗಳ ಕಂದ ನಗುತಲಿಹುದು.
ಚಿತ್ರದುರ್ಗದ ರೈಲು ನಿತ್ಯವೂ ಓಡೋಡಿ
ಮೈಸೂರ ಸೇರುವುದ ನಾನು ಬಲ್ಲೆ
ನಾಳೆ ಮಂಗಳವಾರ, ಮಾರನೆಯ ದಿನ ನವಮಿ,
ಆಮೇಲೆ ನಿಲ್ಲುವೇನೆ ನಾನು ಇಲ್ಲಿ...
ಮರೆತಿಹಳು ಎನ್ನದಿರಿ, ಕಣ್ಮರೆಯ ತೋಟದಲಿ,
ಅಚ್ಚ ಮಲ್ಲಿಗೆಯರಳು ಬಿರಿಯುತಿಹುದು;
ಬಂದುಬಿಡುವೆನು ಬೇಗ, ಮುನಿಯದಿರಿ, ಕೊರಗದಿರಿ,
ಚುಚ್ಚದಿರಿ ಮೊನೆಯಾದ ಮಾತನೆಸೆದು...
- ರಚನೆ: ಕೆ ಎಸ್ ನರಸಿಂಹ ಸ್ವಾಮಿ